BBK 10: ಬಿಗ್‌ಬಾಸ್‌ನಲ್ಲಿ ಕಿಚ್ಚನ ಪಂಚಾಯ್ತಿ ಇಲ್ಲದೆ ವೀಕೆಂಡ್‌ ಮುಕ್ತಾಯ: ಅಸಲಿ ಮ್ಯಾಟರ್‌ ಗೊತ್ತೇ?

Kiccha Sudeep: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಶೋದಲ್ಲಿ, ಈ ವೀಕೆಂಡ್‌ ಕಿಚ್ಚ ಸುದೀಪ್‌ ಇರುವುದಿಲ್ಲ ಎಂಬ ವಿಷಯನ ತಿಳಿದು ಬಂದಿದೆ. ಹಾಗಾದ್ರೆ ಸುದೀಪ್‌ ಈ ವಾರ ಯಾಕಿ ಬರುತ್ತಿಲ್ಲಾ? ಈ ವಾರ ಎಲಿಮಿನೇಷನ್‌ ನಡೆಯಲಿದೆಯಾ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Dec 23, 2023, 10:33 AM IST
  • ಬಿಗ್‌ಬಾಸ್‌ ಮನೆಯಲ್ಲಿ ಏನಾದರೊಂದು ತಪ್ಪು ನಡೆಯುತ್ತಲೇ ಇರುತ್ತಿದ್ದು, ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಮೋಸ ಮಾಡಿದ ಕಾರಣಕ್ಕಾಗಿ ಮನೆಗೆ ಕ್ಯಾಪ್ಟನ್ ಹುದ್ದೆಯನ್ನೇ ತೆಗೆದು ಬಿಟ್ಟಿದ್ದರು.
  • ಬಿಗ್‌ಬಾಸ್‌ನಲ್ಲಿ ಕಿಚ್ಚ ಸುದೀಪ್ ಈ ವಾರ ವೀಕೆಂಡ್ ಶೋನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಕನ್ಫರ್ಮ್ ಆಗಿದ್ದು, ಇದಕ್ಕೆ ಕಾರಣ ಸಿಸಿಎಲ್ ಕಿಚ್ಚ ಸುದೀಪ್ ಮುಂದಾಳತ್ವದಲ್ಲಿಯೇ ನಡೆಯುವ ಮ್ಯಾಚ್.
  • ಕಿಚ್ಚ ಸುದೀಪ್ ಪ್ರತಿ ಸೀಸನ್‌ನಲ್ಲೂ ಕೆಲವೊಂದು ಸಲ ಬ್ಯುಸಿ ಶೆಡ್ಯೂಲ್‌ನಿಂದ ಯಾವುದಾದರೊಂದು ವೀಕೆಂಡ್ ಹೊರಗೆ ಉಳಿಯುತ್ತಾರೆ.
BBK 10: ಬಿಗ್‌ಬಾಸ್‌ನಲ್ಲಿ ಕಿಚ್ಚನ ಪಂಚಾಯ್ತಿ ಇಲ್ಲದೆ ವೀಕೆಂಡ್‌ ಮುಕ್ತಾಯ: ಅಸಲಿ ಮ್ಯಾಟರ್‌ ಗೊತ್ತೇ? title=

Kiccha Sudeep In Bigg Boss Weekend: ಬಿಗ್‌ಬಾಸ್‌ ಸೀಸನ್‌ 10 ರಲ್ಲಿ ಪ್ರತಿ ವಾರವೂ ಮನೆಯಲ್ಲಿ ಏನಾದರೊಂದು ತಪ್ಪು ನಡೆಯುತ್ತಲೇ ಇರುತ್ತಿದ್ದು, ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಮೋಸ ಮಾಡಿದ ಕಾರಣಕ್ಕಾಗಿ ಮನೆಗೆ ಕ್ಯಾಪ್ಟನ್ ಹುದ್ದೆಯನ್ನೇ ತೆಗೆದು ಬಿಟ್ಟಿದ್ದರು. ಆದರೆ, ಅದನ್ನು ಕ್ಷಮಿಸಿದ ಸುದೀಪ್, ಈ ವಾರ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ನೀಡಿ, ವಾರವಿಡೀ ಟಾಸ್ಕ್‌ಗಳ ಆಟ, ಕಿರುಚಾಟ, ಮತ್ತದೇ ಮನಸ್ತಾಪಗಳು, ಒಂದಾ-ಎರಡಾ ಸಿಕ್ಕಾಪಟ್ಟೆ ವಿಚಾರಗಳು ಹುಟ್ಟಿಕೊಂಡಿದ್ದವು. ಹೀಗಾಗಿ ಕಿಚ್ಚ ಸುದೀಪ್ ಯಾವುದರ ಮೇಲೆ ಬೆಳಕು ಚೆಲ್ಲುತ್ತಾರೆ ಎಂಬ ಕುತೂಹಲವು ಇತ್ತು. 

ಬಿಗ್‌ಬಾಸ್ ಮನೆಯಲ್ಲಿ ವಾರವಿಡೀ ಮನೆ ಮಂದಿ ಬೇರೆಯದ್ದೇ ರೀತಿ ನಡೆದುಕೊಳ್ಳುತ್ತಿದ್ದು, ಅದರಲ್ಲೂ ಈ ಸೀಸನ್‌ನ ಸ್ಪರ್ಧಿಗಳು ಅದೆಷ್ಟೋ ಬಾರಿ ಕಿಚ್ಚ ತಿಳಿಸಿ ಹೇಳಿದರು, ಅದನ್ನು ಸರಿ ಪಡಿಸಿಕೊಳ್ಳುವ ಉಸಾಬರಿಗೆ ಹೋಗಿಲ್ಲ. ಟಾಸ್ಕ್ ವಿಚಾರದಲ್ಲಿ ತಪ್ಪು ಮಾಡುತ್ತಾ, ಲಕ್ಸುರಿ ಬಜೆಟ್ ನಲ್ಲಿ ಎಡವುತ್ತಾರೆ. ಆದರೂ ಕಿಚ್ಚನ ಪಂಚಾಯ್ತಿಯಲ್ಲಿ ವಿಚಾರ ಬಂದಾಗ ಸೈಲೆಂಟ್ ಆಗಿ ಬಿಡುತ್ತಾರೆ. ವಾರವಿಡೀ ನೋಡದ ಅದೆಷ್ಟೋ ಜನ ವೀಕೆಂಡ್ ಶೋಗಾಗಿಯೇ ಕಾಯುತ್ತಾ ಇರುತ್ತಿದ್ದು, ಯಾಕಂದರೆ ಕಿಚ್ಚ ಸುದೀಪ್ ಯಾವ ವಿಚಾರದ ಮೇಲೆ ಗಮನ ಚೆಲ್ಲಬಹುದು ಎಂಬ ಕುತೂಹಲಕ್ಕೆ. ಆದರೆ ಈ ವಾರ ಕಿಚ್ಚನ ಪಂಚಾಯ್ತಿ ಮಿಸ್ ಆಗುವ ಸಾಧ್ಯತೆ ಇದೆ‌. 

ಇದನ್ನೂ ಓದಿ: BBK10: ಬಿಗ್‌ ಬಾಸ್‌ ಮನೆಯಲ್ಲಿ ಲಕ್ಷುರಿ ಖರೀದಿಗಾಗಿ ಜಟಾಪಟಿ

ಹೌದು.. ಬಿಗ್‌ಬಾಸ್‌ನಲ್ಲಿ ಕಿಚ್ಚ ಸುದೀಪ್ ಈ ವಾರ ವೀಕೆಂಡ್ ಶೋನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಕನ್ಫರ್ಮ್ ಆಗಿದ್ದು, ಇದಕ್ಕೆ ಕಾರಣ ಸಿಸಿಎಲ್ ಕಿಚ್ಚ ಸುದೀಪ್ ಮುಂದಾಳತ್ವದಲ್ಲಿಯೇ ನಡೆಯುವ ಮ್ಯಾಚ್. ಹೀಗಾಗಿ ಅವರು ಅಲ್ಲಿರಲೇಬೇಕಾಗಿದ್ದು, ಈ ಬಾರಿಯ ಮ್ಯಾಚ್ ಡಿಸೆಂಬರ್ 23 ರಂದು ಉದ್ಘಾಟನೆಯಾಗಲಿದೆ. ಈ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಕ್ರಿಕೆಟ್ ತಾರೆಯರು ಬರಲಿದ್ದಾರೆ. ಹೀಗಾಗಿ ಬಿಗ್‌ಬಾಸ್‌ಗೆ ಸುದೀಪ್‌ ಗೈರಾಗಿದ್ದಾರೆ ಎನ್ನಲಾಗಿದೆ. 

ಕಿಚ್ಚ ಸುದೀಪ್ ಪ್ರತಿ ಸೀಸನ್‌ನಲ್ಲೂ ಕೆಲವೊಂದು ಸಲ ಬ್ಯುಸಿ ಶೆಡ್ಯೂಲ್‌ನಿಂದ ಯಾವುದಾದರೊಂದು ವೀಕೆಂಡ್ ಹೊರಗೆ ಉಳಿಯುತ್ತಿದ್ದು, ಅಂತ ಸಂದರ್ಭದಲ್ಲಿ ಎಲಿಮಿನೇಷನ್ ರೌಂಡ್ ಅನ್ನು ಬಿಗ್‌ಬಾಸ್ ತನ್ನದೇ ಆದ ಮುಂದಾಳತ್ವದಲ್ಲಿ ಮುಂದುವರೆಸಲಿದೆ‌. ಯಾವುದಾದರೂ ವಿಭಿನ್ನ ಟಾಸ್ಕ್ ಕೊಡುವ ಮೂಲಕ ಎಲಿಮಿನೇಷನ್ ಮಾಡಲಾಗುತ್ತಿದ್ದು, ಈ ವಾರವೂ ಎಲಿಮಿನೇಷನ್ ಆಗಲಿದೆ. ಆದರೆ‌ ಕಿಚ್ಚನ ಗೈರು ಈ ವೀಕೆಂಡ್‌ನಲ್ಲಿ ಕಾಣಿಸಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News