ಈ ಹಣ್ಣುಗಳನ್ನು ತಿಂದ ಬಳಿಕ ತಪ್ಪಿಯೂ ನೀರು ಕುಡಿಯಬೇಡಿ..!

Health Tips : ಕೆಲವು ರೀತಿಯ ಆಹಾರಗಳನ್ನು ಸೇವಿಸಿದ ನಂತರ ನಾವು ತಪ್ಪಾಗಿಯೂ ನೀರು ಕುಡಿಯಬಾರದು. ಅಂತಹ ಆಹಾರಗಳು ಯಾವುವು..? ಎಂದು ತಿಳಿಯೋಣ. 

Written by - Chetana Devarmani | Last Updated : Mar 30, 2024, 01:59 PM IST
  • ಈ ಹಣ್ಣು ತಿಂದ ಬಳಿಕ ನೀರು ಕುಡಿಯಬೇಡಿ
  • ಅಂತಹ ಆಹಾರಗಳು ಯಾವುವು..?
  • ಏನು ತಿಂದ ನಂತರ ನೀರು ಕುಡಿಯಬಾರದು?
ಈ ಹಣ್ಣುಗಳನ್ನು ತಿಂದ ಬಳಿಕ ತಪ್ಪಿಯೂ ನೀರು ಕುಡಿಯಬೇಡಿ..! title=

Avoid Water After Eating These Fruits: ನಾವು ಬದುಕಲು ಆಹಾರ ಎಷ್ಟು ಮುಖ್ಯವೋ... ನೀರು ಕೂಡ ಅಷ್ಟೇ ಮುಖ್ಯ. ದಿನಕ್ಕೆ ಕನಿಷ್ಠ ನಾಲ್ಕು ಲೀಟರ್ ನೀರು ಕುಡಿಯಬೇಕು ಎನ್ನುತ್ತಾರೆ ತಜ್ಞರು. ಆದರೆ ಕೆಲವು ಬಗೆಯ ಆಹಾರಗಳನ್ನು ತಿಂದ ಮೇಲೆ ನಾವು ಅಪ್ಪಿತಪ್ಪಿಯೂ ನೀರು ಕುಡಿಯಬಾರದು. ಅಂತಹ ಆಹಾರಗಳು ಯಾವುವು..? ಏನು ತಿಂದ ನಂತರ ನೀರು ಕುಡಿಯಬಾರದು? ಏಕೆ ಕುಡಿಯಬಾರದು ಎಂದು ತಿಳಿಯೋಣ.

1. ಕಲ್ಲಂಗಡಿ 

ಬೇಸಿಗೆ ಬಂದಿದೆ. ಮಾರುಕಟ್ಟೆಯಲ್ಲಿ ಬಹುತೇಕ ಎಲ್ಲೆಡೆ ನಾವು ಕಲ್ಲಂಗಡಿ ಹಣ್ಣುಗಳನ್ನು ನೋಡುತ್ತೇವೆ. ನಾವೂ ಕಲ್ಲಂಗಡಿ ಹಣ್ಣನ್ನು ಕೊಂಡು ಸವಿಯುತ್ತೇವೆ. ಬಿಸಿಲಿನ ತಾಪವನ್ನು ಕಡಿಮೆ ಮಾಡುತ್ತೇವೆ. ಈ ಕಲ್ಲಂಗಡಿ ತಿಂದ ನಂತರ ಅಪ್ಪಿತಪ್ಪಿಯೂ ನೀರು ಕುಡಿಯಬೇಡಿ. ಏಕೆಂದರೆ.. ಕಲ್ಲಂಗಡಿಯಲ್ಲಿ ಈಗಾಗಲೇ ನೀರಿನ ಅಂಶವಿರುತ್ತದೆ. ಮತ್ತೆ ಹೆಚ್ಚುವರಿ ನೀರು ಕುಡಿದರೆ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ದಾಲ್ಚಿನ್ನಿ ಮಧುಮೇಹ ನಿಯಂತ್ರಣಕ್ಕೆ ರಾಮಬಾಣ, ಈ ರೀತಿ ಬಳಸಿದರೆ ಬ್ಲಡ್‌ ಶುಗರ್‌ ಕಂಟ್ರೋಲ್‌ ಆಗೋದು ಖಚಿತ ! 

2. ಬಾಳೆಹಣ್ಣು 

ಇದು ನಮ್ಮಲ್ಲಿ ಹಲವರು ಮಾಡುವ ತಪ್ಪು. ಬಾಳೆಹಣ್ಣು ತಿಂದ ನಂತರವೂ ನೀರು ಕುಡಿಯಬೇಡಿ. ಅನೇಕ ಮಕ್ಕಳಿಗೆ ಬಾಳೆ ಹಣ್ಣನ್ನು ತಿನ್ನಿಸಲಾಗುತ್ತದೆ ಮತ್ತು ನಂತರ ತಕ್ಷಣವೇ ನೀರನ್ನು ಕುಡಿಸಲಾಗುತ್ತದೆ. ಹಾಗೆ ಮಾಡಬೇಡಿ. 

3. ಸೇಬು ಹಣ್ಣು

ಸೇಬು ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಿನಕ್ಕೊಂದು ಸೇಬು ತಿಂದರೆ ಯಾವ ರೋಗವೂ ಬಳಿಗೆ ಸುಳಿಯದು ಎನ್ನಲಾಗುತ್ತದೆ. ಆದರೆ ಸೇಬು ಹಣ್ಣು ತಿಂದ ನಂತರ ನೀರು ಕುಡಿಯಬಾರದು. ಇದು ಸವೆತದ ಸಮಸ್ಯೆಗಳನ್ನು ಉಂಟುಮಾಡುತ್ತದೆ.

4. ದಾಳಿಂಬೆ ಹಣ್ಣು

ದಾಳಿಂಬೆ ಹಣ್ಣು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದನ್ನು ತಿಂದ ಬಳಿಕ ತಪ್ಪಾಗಿಯೂ ನೀರು ಕುಡಿಯಬೇಡಿ. ಅದರಿಂದಾಗಿ ಹೊಟ್ಟೆ ಉರಿಯುತ್ತದೆ. ವಾಂತಿಯೂ ಆಗಬಹುದು.

ಇದನ್ನೂ ಓದಿ: ಖರ್ಜೂರವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಈ ಖಾಯಿಲೆಗಳು ವಾಸಿಯಾಗುತ್ತವೆ! ತಿನ್ನುವ ಸರಿಯಾದ ವಿಧಾನ ತಿಳಿಯಿರಿ 

5. ಕಿತ್ತಳೆ ಹಣ್ಣು 

ಕಿತ್ತಳೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ತಿಂದ ಬಳಿಕವೂ ನೀರು ಕುಡಿಯಬೇಡಿ. ಕಿತ್ತಳೆ ಹಣ್ಣು ತಿಂದ ಮೇಲೆ ನೀರು ಕುಡಿದರೆ ದೇಹದ ಪಿಎಚ್ ಮೌಲ್ಯದಲ್ಲಿ ಬದಲಾವಣೆಯಾಗುತ್ತದೆ. ಜೀರ್ಣಕ್ರಿಯೆಯ ಸಮಸ್ಯೆಗಳೂ ಉಂಟಾಗುತ್ತವೆ.

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News