ಮಧುಮೇಹ: ಈ ಎಲೆಯ ರಸ ಕ್ಷಣಾರ್ಧದಲ್ಲೇ ಶುಗರ್‌ ಲೆವಲ್‌ ಕಂಟ್ರೋಲ್‌ ಮಾಡುತ್ತೆ!

Mango Leaves For Diabetes : ಮಧುಮೇಹದ ಕಾರಣ ಕೆಲವೊಮ್ಮೆ ಆಹಾರ ಸೇವಿಸಿದ ನಂತರ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ವೇಗವಾಗಿ ಹೆಚ್ಚಾಗುತ್ತದೆ. ಮಾವಿನ ಎಲೆಗಳ ಬಳಕೆಯಿಂದ ಶುಗರ್‌ ಲೆವಲ್‌ನ್ನು ಕಂಟ್ರೋಲ್‌ ಮಾಡಬಹುದು.   

Written by - Chetana Devarmani | Last Updated : Nov 21, 2023, 11:54 AM IST
  • ಮಧುಮೇಹ ನಿಯಂತ್ರಣಕ್ಕೆ ಮನೆಮದ್ದು
  • ಈ ಎಲೆಯಲ್ಲಿದೆ ಮಧುಮೇಹ ನಿಯಂತ್ರಿಸುವ ಶಕ್ತಿ
  • ಶುಗರ್‌ ಲೆವಲ್‌ ಕಂಟ್ರೋಲ್‌ ಮಾಡುವ ವಿಧಾನ
ಮಧುಮೇಹ: ಈ ಎಲೆಯ ರಸ ಕ್ಷಣಾರ್ಧದಲ್ಲೇ ಶುಗರ್‌ ಲೆವಲ್‌ ಕಂಟ್ರೋಲ್‌ ಮಾಡುತ್ತೆ!  title=
Mango Leaves

Mango Leaves Benefits: ಮಧುಮೇಹ ರೋಗಿಗಳಲ್ಲಿ ಆಹಾರ ತಿನ್ನುವ ಮೊದಲು ಮತ್ತು ನಂತರ ರಕ್ತದಲ್ಲಿನ ಸಕ್ಕರೆಯು ಅಧಿಕವಾಗಿರುತ್ತದೆ. ರಕ್ತದಲ್ಲಿನ ಗ್ಲೂಕೋಸ್‌ನ ಹೆಚ್ಚಿನ ಮಟ್ಟವು ನರಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಕ್ರಮೇಣ ಇತರ ಅಂಗಗಳು ಸಹ ಹಾನಿಗೊಳಗಾಗಲು ಪ್ರಾರಂಭಿಸುತ್ತವೆ. ಆದರೆ ಮಾವಿನ ಎಲೆಗಳನ್ನು ಬಳಸುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು.

ಪಬ್ಮೆಡ್ ಸೆಂಟ್ರಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮಾವಿನ ಎಲೆಗಳು ವಿವಿಧ ಫೈಟೊಕೆಮಿಕಲ್‌ಗಳನ್ನು ಹೊಂದಿರುತ್ತವೆ. ಅವುಗಳು ಮಧುಮೇಹ ವಿರೋಧಿ ಗುಣಲಕ್ಷಣಗಳನ್ನು ಹೊಂದಿವೆ. ಅವು ಮ್ಯಾಂಜಿಫೆರಿಲ್ ಸಂಯುಕ್ತವನ್ನು ಸಹ ಹೊಂದಿರುತ್ತವೆ. ಇದು ದೇಹದಲ್ಲಿ ಇನ್ಸುಲಿನ್ ಪರಿಣಾಮವನ್ನು ಹೆಚ್ಚಿಸುತ್ತದೆ ಮತ್ತು ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. 

ಇದನ್ನೂ ಓದಿ : ಪ್ರತಿದಿನ ಒಂದು ಚಮಚ ತುಪ್ಪ ತಿನ್ನಿ ಈ ಕಾಯಿಲೆಗಳು ಹತ್ತಿರಕ್ಕೂ ಬರುವುದಿಲ್ಲ!

ಸಿಹಿತಿಂಡಿಗಳನ್ನು ತಿಂದ ನಂತರ ಮಧುಮೇಹಿಗಳ ರಕ್ತದಲ್ಲಿನ ಗ್ಲೂಕೋಸ್ ತುಂಬಾ ಹೆಚ್ಚಾಗುತ್ತದೆ. ಇದು ದೇಹಕ್ಕೆ ಅಪಾಯಕಾರಿ. ಆದರೆ ಅದೇ ಅಧ್ಯಯನದ ಪ್ರಕಾರ ಮಾವಿನ ಎಲೆಗಳ ಬಳಕೆಯು ಆಹಾರ ತಿಂದ ನಂತರವೂ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಈ ಸಂಶೋಧನೆಯು ಸಕ್ಕರೆಯನ್ನು ನಿಯಂತ್ರಿಸುವುದರ ಜೊತೆಗೆ, ಮಾವಿನ ಎಲೆಗಳು ಲಿಪಿಡ್ ಪ್ರೊಫೈಲ್ ಅನ್ನು ಸುಧಾರಿಸುತ್ತದೆ ಎಂದು ಹೇಳುತ್ತದೆ. ಇದರಿಂದಾಗಿ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟಗಳು ಸಹ ನಿಯಂತ್ರಣಕ್ಕೆ ಬರುತ್ತವೆ. ಇದರೊಂದಿಗೆ ಸ್ಥೂಲಕಾಯದಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.

ಮಧುಮೇಹದಲ್ಲಿ ಮಾವಿನ ಎಲೆಗಳ ಬಳಕೆ : 

ಮಾವಿನ ಎಲೆಯ ರಸವು ಈ ರೋಗವನ್ನು ನಿಯಂತ್ರಿಸಲು ಪ್ರಯೋಜನಕಾರಿಯಾಗಿದೆ. ನೀವು ಎರಡು ವಿಧಾನಗಳಲ್ಲಿ ಮಾವಿನ ಎಲೆ ಬಳಸಬಹುದು.

ಮೊದಲ ವಿಧಾನ- 10-15 ಎಲೆಗಳನ್ನು ಅರೆದು ನಂತರ ಅವುಗಳನ್ನು ಹಿಂಡಿ, ರಸವನ್ನು ಹೊರತೆಗೆಯಿರಿ. ಈ ರಸವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ಎರಡನೆಯ ವಿಧಾನ- 10-15 ಮಾವಿನ ಎಲೆಗಳನ್ನು ತೆಗೆದುಕೊಂಡು 1 ಲೋಟ ನೀರಿನಲ್ಲಿ ಕುದಿಸಿ. ನೀರು ಅರ್ಧಷ್ಟು ಕಡಿಮೆ ಆಗುವವರೆಗೂ ಕುದಿಸಿ. ನಂತರ ಅದನ್ನು ಮುಚ್ಚಿ ರಾತ್ರಿಯಿಡೀ ಬಿಟಿ. ಬೆಳಿಗ್ಗೆ ಫಿಲ್ಟರ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಇದನ್ನೂ ಓದಿ : ಈ ಆಹಾರಗಳನ್ನು ಸೇವಿಸಿದ ಬಳಿಕ ತಪ್ಪಿಯೂ ನೀರು ಕುಡಿಯಬೇಡಿ! 

ಸೂಚನೆ: ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರು ಅಥವಾ ಪೌಷ್ಟಿಕತಜ್ಞರ ಸಹಾಯವನ್ನು ತೆಗೆದುಕೊಳ್ಳಿ. ಪರಿಹಾರದ ಸರಿಯಾದ ಡೋಸೇಜ್ ಬಗ್ಗೆ ಅವರು ನಿಮಗೆ ಸರಿಯಾದ ಸಲಹೆಯನ್ನು ನೀಡುತ್ತಾರೆ.

(Disclaimer: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ರೀತಿಯ ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿರಲು ಸಾಧ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News