ಹಸಿ ಮೆಣಸಿನಕಾಯಿ ಹೊಲಕ್ಕೆ ಸಿಸಿ ಕ್ಯಾಮರಾ..! ಮಾಲೀಕನ ಐಡಿಯಾಗೆ ಜನ ಶಾಕ್

Written by - Manjunath Naragund | Last Updated : Jan 30, 2024, 10:24 PM IST
  • ಮೆಣಿಸಿನಕಾಯಿ ಬೆಳೆಗೆ ಕಳ್ಳರ ಕಾಟ ಹೆಚ್ಚಾದ ಹಿನ್ನಲೆ ಶಿವಪುತ್ರಪ್ಪ ದ್ಯಾಮಣ್ಣವರ ಅವರು ಬೆಳೆಗೆ ಸಿಸಿ ಕ್ಯಾಮೆರಾದ ಹದ್ದಿನ ಕಣ್ಣಿಟ್ಟಿದ್ದಾರೆ
  • ಸೋಲಾರ್ ಮೂಲಕ ಜಮೀನಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು ಇದು ತಾಲೂಕಿನ ಬಹುತೇಕ ಕಡೆಗಳಲ್ಲಿ ಅಳವಡಿಕೆ ನಡೆಸಲಾಗಿದೆ
  • ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಮೆಣಸಿನಕಾಯಿಗೆ 80 ರಿಂದ 90 ಸಾವಿರ ರೂ ಇದೆ
 ಹಸಿ ಮೆಣಸಿನಕಾಯಿ ಹೊಲಕ್ಕೆ ಸಿಸಿ ಕ್ಯಾಮರಾ..! ಮಾಲೀಕನ ಐಡಿಯಾಗೆ ಜನ ಶಾಕ್ title=

ಅನ್ನದಾತರಿಗೆ ಬೆಳೆ ಬಂದರೆ ಒಂದು ಸಂಕಟ ಬೆಳೆ ಬಾರದಿದ್ದರೂ ಒಂದು ಸಂಕಟ. ಈಗ ದಟ್ಟವಾದ ಬರಗಾಲ ಬಿದ್ದಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿಯೂ ರೈತರು ಬೆಳೆದ ಬೆಳೆಗಳಿಗೆ ಕಳ್ಳಕಾಕರ ಕಾಟ ಹೆಚ್ಚಾಗಿದೆ. ಅದರಲ್ಲೂ ಹಸಿ ಮೆಣಸಿನಕಾಯಿ ಬೆಳೆಗೆ ಖದೀಮರು ಬಿಟ್ಟು ಬಿಡದೇ ಕಾಡತಾ ಇದ್ದಾರೆ. ಅದು ಎಲ್ಲಿ ರೈತರು ಇದಕ್ಕೆ ಏನು ಉಪಾಯ ಮಾಡಿದರೂ ಗೊತ್ತಾ....

ಟೊಮೇಟೊ, ಈರುಳ್ಳಿ ಬೆಲೆ ಗಗನಕ್ಕೇರಿದಾಗ ಖದೀಮರು ಕತ್ತಲಾ‌ ಗುವುದಕ್ಕಾಗಿಯೇ ಕಾದು ಬೆಲೆಯನ್ನು ಕದ್ದು ಪರಾರಿಯಾಗುತ್ತಿದ್ದರು. ಹೀಗಾಗಿ ರೈತರು ತಮ್ಮ ಜಮೀನಿಗೆ ಸಿಸಿ ಕ್ಯಾಮೆರಾ ಅಳವಡಿಸುತ್ತಿದ್ದರು. ಆದರೆ ಈಗ ಮೆಣಿಸಿನಕಾಯಿ ಬೆಳೆಗೆ ಕಳ್ಳರ ಕಾಟ ಹೆಚ್ಚಾಗಿದ್ದು ಬೆಳೆಯನ್ನು ಕಾಪಾಡಿಕೊಳ್ಳುವುದೇ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಜಮೀನಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ‌ ಹಿರೇನರ್ತಿ ಗ್ರಾಮದ ರೈತ ತಾನು ಬೆಳೆದ ಮೆಣಸಿನಕಾಯಿ ಬೆಳೆಯನ್ನು ಕಳ್ಳರಿಂದ ಕಾಪಾಡಿಕೊಳ್ಳಲು ಜಮೀನಿಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾನೆ.

ಇದನ್ನೂ ಓದಿ: Credit Card: ಕ್ರೆಡಿಟ್ ಕಾರ್ಡ್ ಅನ್ನು ಈ ರೀತಿ ಬಳಸಿದರೆ ಸಿಗುತ್ತೆ ಹೆಚ್ಚಿನ ಪ್ರಯೋಜನ

ಹೊಲದಲ್ಲಿ ಕಷ್ಟ ಪಟ್ಟು ಬೆಳೆ ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನ ಮಾಡಿದರು ಆಗತಾ. ಹಗಲು ರಾತ್ರಿ ಕಾವಲುಗಾರರು ಕಣ್ಣಲ್ಲಿ ಕಣ್ಣು ಇರಿಸಿ ಕಾಯತಾ ಇದ್ದರು. ಇನ್ನು  ಹೊಲಕ್ಕೆ ತಂತಿ,‌ ವಿದ್ಯುತ್ ಪ್ರಸರಣ ಬೇಲಿ ಹಾಕಿಸಿದರು ಬಿಡಲಿಲ್ಲ.‌ಇದರಿಂದ ರೊಚ್ಚಿಗೆದ್ದ  ರೈತರು ಈಗ ಸಾಕಷ್ಟು ಹಣ ವ್ಯಯ ಮಾಡಿ ಸಿಸಿ ಟವಿ ಅಳವಡಿಕೆ ಮಾಡಿದ್ದಾರೆ.

ಮೆಣಿಸಿನಕಾಯಿ ಬೆಳೆಗೆ ಕಳ್ಳರ ಕಾಟ ಹೆಚ್ಚಾದ ಹಿನ್ನಲೆ ಶಿವಪುತ್ರಪ್ಪ ದ್ಯಾಮಣ್ಣವರ ಅವರು ಬೆಳೆಗೆ ಸಿಸಿ ಕ್ಯಾಮೆರಾದ ಹದ್ದಿನ ಕಣ್ಣಿಟ್ಟಿದ್ದಾರೆ. ಸೋಲಾರ್ ಮೂಲಕ ಜಮೀನಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು ಇದು ತಾಲೂಕಿನ ಬಹುತೇಕ ಕಡೆಗಳಲ್ಲಿ ಅಳವಡಿಕೆ ನಡೆಸಲಾಗಿದೆ.ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಮೆಣಸಿನಕಾಯಿಗೆ 80 ರಿಂದ 90 ಸಾವಿರ ರೂ ಇದೆ. ಹೀಗಾಗಿ ಮೆಣಸಿನಕಾಯಿ ಕಳ್ಳತನ ಮಾಡೋರು ಜಾಸ್ತಿಯಾಗಿದ್ದಾರೆ. ಶಿವಪುತ್ರಪ್ಪ ಅವರು ಐದು ಎಕರೆಯಲ್ಲಿ ಮೆಣಸಿನಕಾಯಿ ಬೆಳದಿದ್ದಾರೆ. ಹೀಗಾಗಿ ಮೆಣಸಿನಕಾಯಿ ಕಳ್ಳತನ ಮಾಡಬಾರದು ಅನ್ನೋ ಉದ್ದೇಶಕ್ಕೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ.ಈಗಲಾದರೂ ಕಳ್ಳರ ಕಾಟ ಕಡಿಮೆ ಆಗಬಹುದು ಅಂತಾ ರೈತರ ಅಂಬೋಣ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News