ನನಗೆ ನೋವಾಗಿದೆ ನಾನ್ಯಾಕೆ ಕ್ಷಮೆ ಕೇಳಬೇಕು-ಶೃತಿ ಹರಿಹರನ್

ಮೀಟೂ ವಿಚಾರವಾಗಿ ಶೃತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಅವರ ನಡುವೆ ಕಾವೇರಿರುವ ಸಮರಕ್ಕೆ ಸಂಧಾನ ಮಾಡಲು ಪ್ರಯತ್ನಿಸಿದ ಚಲನಚಿತ್ರ ವಾಣಿಜ್ಯ ಮಂಡಳಿ ಯತ್ನ ಈಗ ವಿಫಲವಾಗಿದೆ.

Last Updated : Oct 25, 2018, 09:07 PM IST
ನನಗೆ ನೋವಾಗಿದೆ ನಾನ್ಯಾಕೆ ಕ್ಷಮೆ ಕೇಳಬೇಕು-ಶೃತಿ ಹರಿಹರನ್  title=
sreengrab

ಬೆಂಗಳೂರು: ಮೀಟೂ ವಿಚಾರವಾಗಿ ಶೃತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಅವರ ನಡುವೆ ಕಾವೇರಿರುವ ಸಮರಕ್ಕೆ ಸಂಧಾನ ಮಾಡಲು ಪ್ರಯತ್ನಿಸಿದ ಚಲನಚಿತ್ರ ವಾಣಿಜ್ಯ ಮಂಡಳಿ ಯತ್ನ ಈಗ ವಿಫಲವಾಗಿದೆ.

ಅಂಬರೀಶ್ ಅವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟಿ ಶೃತಿ ಹರಿಹರನ್ " ನನಗೆ ನೋವಾಗಿದೆ ನಾನೇಕೆ ಕ್ಷಮೆ ಕೇಳಬೇಕು. ಫಿಲಂ ಚೇಂಬರ್ ಅವರ ಹೇಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ದ, ನಾನು ಅಂಬರೀಶ್ ಅವರ ಮಾತಿಗೆ ಬೆಲೆಕೊಡುತ್ತೇನೆ ಆದ್ದರಿಂದ ಫಿಲಂ ಚೇಂಬರ್ ನಿರ್ಧಾರಕ್ಕಾಗಿ ನಾನು ನಾಳೆ ಬೆಳೆಗ್ಗೆ ವರೆಗೂ ಕಾಯುತ್ತೇನೆ" ಎಂದು ಸಂಧಾನ ಸಭೆ ಬಳಿಕ ತಿಳಿಸಿದರು. 

ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಸಂಧಾನ ಸಭೆಯ ನಂತರ ಮಾತನಾಡಿದ ನಟ ಅರ್ಜುನ್ ಸರ್ಜಾ "ಸಂಧಾನ ಎಂದಿಗೂ ಸಾಧ್ಯವಿಲ್ಲ ನನ್ನ ಮೇಲೆ ಬಂದ ಆರೋಪದಿಂದ ನನ್ನ ಮನಸ್ಸಿಗೆ ನೋವಾಗಿದೆ ತಮ್ಮ 35 ವರ್ಷಗಳ ವೃತ್ತಿ ಬದುಕಿನಲ್ಲಿ ಇಂತಹ ಯಾವುದೇ ಆರೋಪ ಬಂದಿಲ್ಲ" ಎಂದು ಹೇಳಿದರು. 

ಆ ಮೂಲಕ ಸಂಧಾನ ಮಾಡಲು ಯತ್ನಿಸಿದ್ದ ಹಿರಿಯ ನಟ ಅಂಬರೀಶ್ ನೇತೃತ್ವದ ಸಂಧಾನ ಸಭೆ ಯತ್ನ ಈಗ ವಿಫಲವಾಗಿದೆ.ಈಗ ನಟ ನಟಯರಿಬ್ಬರು ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳುವ ಕ್ರಮಕ್ಕೆ ಮುಂದಾಗಿದ್ದಾರೆ.

 

Trending News