ಬಿಜೆಪಿ ನುಂಗಿ ನೀರು ಕುಡಿದ 40 ಸಾವಿರ ಕೋಟಿಯಲ್ಲಿ 4 ಗ್ಯಾರಂಟಿ ಯೋಜನೆ ಪೂರೈಸಬಹುದಿತ್ತು: ಕಾಂಗ್ರೆಸ್

Rs 40,000 crore Covid scam: ಸ್ವಪಕ್ಷದವರಿಂದಲೇ ಬಿಜೆಪಿಯ 40 ಸಾವಿರ ಕೋಟಿಯ ಕೋವಿಡ್ ಹಗರಣವನ್ನು ಬಹಿರಂಗಪಡಿಸಿದರೂ "ನಾ ಖವುಂಗಾ ನಾ ಖಾನೆದುಂಗ" ಎಂದು ಭಾಷಣ ಬಿಗಿಯುವ ಪ್ರಧಾನಿ ಮೋದಿಯವರು "ಕೈ ಕಟ್ ಬಾಯ್ ಮುಚ್" ಎನ್ನುವಂತೆ ಸುಮ್ಮನಿರುವುದೇಕೆ? ಐಟಿ, ಇಡಿ, ಸಿಬಿಐ ಮುಂತಾದ ತನಿಖಾ ಸಂಸ್ಥೆಗಳು ಎಲ್ಲಿ ಹೋದವು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Written by - Puttaraj K Alur | Last Updated : Dec 28, 2023, 12:45 PM IST
  • ಕೋವಿಡ್ ಹೆಸರಲ್ಲಿ 40 ಸಾವಿರ ಕೋಟಿ ರೂ. ಲೂಟಿ ಹೊಡೆದಿದ್ದು ನಿಜವೇ?
  • ಸುಳ್ಳಾಗಿದ್ದರೆ ನಿಮ್ಮವರೇ ಮಾಡಿದ ಆರೋಪದ ಬಗ್ಗೆ ಏಕೆ ಇನ್ನೂ ಮೌನವಾಗಿದ್ದೀರಿ?
  • "ಮೌನಂ ಸಮ್ಮತಿ ಲಕ್ಷಣಂ" ಎನ್ನುವುದು ನಿಮ್ಮ ಮೌನದ ಅರ್ಥವೇ? ಎಂದು ವಿಜಯೇಂದ್ರಗೆ ಕಾಂಗ್ರೆಸ್ ಪ್ರಶ್ನೆ
ಬಿಜೆಪಿ ನುಂಗಿ ನೀರು ಕುಡಿದ 40 ಸಾವಿರ ಕೋಟಿಯಲ್ಲಿ 4 ಗ್ಯಾರಂಟಿ ಯೋಜನೆ ಪೂರೈಸಬಹುದಿತ್ತು: ಕಾಂಗ್ರೆಸ್ title=
ಬಿ.ವೈ.ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ಆಕ್ರೋಶ!

ಬೆಂಗಳೂರು: ಕೊರೊನಾ ಸಾಂಕ್ರಾಮಿಕದ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ನಡೆದಿತ್ತು ಎನ್ನಲಾದ 40 ಸಾವಿರ ಕೋಟಿ ರೂ. ಹಗರಣ ಸಂಬಂಧ ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಳಿ ನಡೆಸಿದೆ. ಈ ಬಗ್ಗೆ ಗುರುವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ರಾಜ್ಯಾಧಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕಿಡಿಕಾರಿದೆ.

‘ಒಂದಲ್ಲ, ಎರಡಲ್ಲ, ಬರೋಬ್ಬರಿ 40 ಸಾವಿರ ಕೋಟಿ ರೂ. ನುಂಗಿ ನೀರು ಕುಡಿದಿದೆ ಬಿಜೆಪಿ! ಇದನ್ನು ನಾವು ಹೇಳಿದ್ದಲ್ಲ, ಬಜೆಪಿಗರೇ ಹೇಳಿದ್ದು. ಈ 40,000 ಕೋಟಿಯಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಪೂರೈಸಬಹುದಿತ್ತು. ಭ್ರಷ್ಟಾಚಾರದ ಗ್ಯಾರಂಟಿ ಕೂಡುವ ಬಿಜೆಪಿಗೆ ಜನತೆಯ ನೆರವಿಗೆ ನಿಲ್ಲುವ ಆಲೋಚನೆ ಬರಲು ಸಾಧ್ಯವಿಲ್ಲ’ವೆಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ ಗೆಲ್ಲುವುದಕ್ಕೆ ಟಾಸ್ಕ್

‘ಮಾಜಿ ಶ್ಯಾಡೋ ಸಿಎಂ ಬಿ.ವೈ.ವಿಜಯೇಂದ್ರ ಅವರೇ, ರಾಜ್ಯದ ಜನರಲ್ಲಿ ಉದ್ಭವಿಸಿರುವ ಪ್ರಶ್ನೆ ಹಾಗೂ ನೀವು ಉತ್ತರಿಸಲೇಬೇಕಾದ ಪ್ರಶ್ನೆಗಳು. ಕೋವಿಡ್ ಹೆಸರಲ್ಲಿ 40 ಸಾವಿರ ಕೋಟಿ ರೂ. ಲೂಟಿ ಹೊಡೆದಿದ್ದು ನಿಜವೇ? ನಿಜವಲ್ಲದೆ ಸುಳ್ಳಾಗಿದ್ದರೆ ನಿಮ್ಮವರೇ ಮಾಡಿದ ಆರೋಪದ ಬಗ್ಗೆ ಏಕೆ ಇನ್ನೂ ಮೌನವಾಗಿದ್ದೀರಿ?, "ಮೌನಂ ಸಮ್ಮತಿ ಲಕ್ಷಣಂ" ಎನ್ನುವುದು ನಿಮ್ಮ ಮೌನದ ಅರ್ಥವೇ?, ಮಾತಾಡಿದರೆ ದಾಖಲೆಗಳು ಬಿಡುಗಡೆಯಾಗುವ ಭಯ ನಿಮ್ಮಲ್ಲಿ ಕಾಡುತ್ತಿದೆಯೇ? ಅಥವಾ BSY ಅವರನ್ನು ನೆಪಮಾತ್ರಕ್ಕೆ ಸಿಎಂ ಸ್ಥಾನದಲ್ಲಿ ಕೂರಿಸಿ ನೀವೇ ಶ್ಯಾಡೋ ಸಿಎಂ ಆಗಿ "ವ್ಯವಹಾರ" ಮಾಡ್ತಿದ್ರಾ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ತನಿಖಾ ಸಂಸ್ಥೆಗಳು ಎಲ್ಲಿ ಹೋದವು?

‘ಸ್ವಪಕ್ಷದವರಿಂದಲೇ ಬಿಜೆಪಿಯ 40 ಸಾವಿರ ಕೋಟಿಯ ಕೋವಿಡ್ ಹಗರಣವನ್ನು ಬಹಿರಂಗಪಡಿಸಿದರೂ "ನಾ ಖವುಂಗಾ ನಾ ಖಾನೆದುಂಗ" ಎಂದು ಭಾಷಣ ಬಿಗಿಯುವ ಪ್ರಧಾನಿ ಮೋದಿಯವರು "ಕೈ ಕಟ್ ಬಾಯ್ ಮುಚ್" ಎನ್ನುವಂತೆ ಸುಮ್ಮನಿರುವುದೇಕೆ? ಐಟಿ, ಇಡಿ, ಸಿಬಿಐ ಮುಂತಾದ ತನಿಖಾ ಸಂಸ್ಥೆಗಳು ಎಲ್ಲಿ ಹೋದವು? ಭ್ರಷ್ಟಾಚಾರದ ಬಗ್ಗೆ ನಿಜಕ್ಕೂ ನಿಷ್ಠುರತೆ ಹೊಂದಿದ್ದರೆ ಮೋದಿಯವರು ತಮ್ಮ ಪಕ್ಷದವರ ಮೇಲೆ ತನಿಖೆ ನಡೆಸಲಿ’ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಇದನ್ನೂ ಓದಿ: ಕನ್ನಡವನ್ನು ಕಡೆಗಣಿಸಿದ್ದ ಪರಭಾಷಿಕರ ಮೊಂಡುತನಕ್ಕೆ ಪಾಠ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News