IPL 2024, CSK vs RCB: ಅಂಪೈರ್​​ಗಳ ಜೊತೆ ವಿರಾಟ್‌ ಕೊಹ್ಲಿ ವಾಗ್ವಾದ, ಕಾರಣವೇನು?

Indian Premier League 2024: ಬೌಲರ್‌ಗಳ ಕೈಯಿಂದ ಚೆಂಡು ಜಾರುತ್ತಿತ್ತು. ಹೀಗಾಗಿ ಬ್ಯಾಟ್ಸಮನ್‌ಗಳ ವಿರುದ್ಧ ಚೆನ್ನಾಗಿ ಬೌಲಿಂಗ್‌ ಮಾಡಲು ಸಾಧ್ಯವಾಗುತ್ತಿರುತ್ತಿರಲಿಲ್ಲ. ಹೀಗಾಗಿ ಕೊಹ್ಲಿ- ಡುಪ್ಲೆಸಿಸ್‌ ಇಬ್ಬರೂ ಚೆಂಡನ್ನು ಬದಲಾಯಿಸುವಂತೆ ಅಂಪೈರ್‌ಗೆ ಪದೇ ಪದೇ ಮನವಿ ಮಾಡಿಕೊಂಡರು. ಆದರೆ ಇದಕ್ಕೆ ಅವರು ಒಪ್ಪಿರಲಿಲ್ಲ.

Written by - Puttaraj K Alur | Last Updated : May 19, 2024, 03:58 PM IST
  • ಅಂಪೈರ್‌ಗಳ ವಿರುದ್ಧ ವಿರಾಟ್‌ ಕೊಹ್ಲಿ & ಫಾಫ್‌ ಡು ಪ್ಲೆಸಿಸ್‌ ತೀವ್ರ ವಾಗ್ವಾದ
  • ಮಳೆಯಿಂದ ಒದ್ದೆಯಾದ ಚೆಂಡು ಬದಲಾಯಿಸುವಂತೆ ಅಂಪೈರ್‌ಗಳಿಗೆ ಮನವಿ
  • ಅಂಪೈರ್‌ ನಿರ್ಧಾರಕ್ಕೆ ಮೈದಾನದಲ್ಲಿಯೇ ಕೊಹ್ಲಿ ಮತ್ತು ಡು ಪ್ಲೆಸಿಸ್‌ ಆಕ್ರೋಶ
IPL 2024, CSK vs RCB: ಅಂಪೈರ್​​ಗಳ ಜೊತೆ ವಿರಾಟ್‌ ಕೊಹ್ಲಿ ವಾಗ್ವಾದ, ಕಾರಣವೇನು? title=
ಅಂಪೈರ್‌ಗಳ ವಿರುದ್ಧ ಕೊಹ್ಲಿ ಆಕ್ರೋಶ!

ಬೆಂಗಳೂರು: ಶನಿವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣಲ್ಲಿ ನಡೆದ ʼಮಾಡು ಇಲ್ಲವೇ ಮಡಿʼ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ರಣರೋಚಕ ಗೆಲುವು ಸಾಧಿಸಿತು. ಈ ಪಂದ್ಯದ ಗೆಲುವಿಗಾಗಿ ವಿರಾಟ್‌ ಕೊಹ್ಲಿ ಮತ್ತು ನಾಯಕ ಫಾಫ್‌ ಡು ಪ್ಲೆಸಿಸ್‌ ಶ್ರಮ ತುಸು ಹೆಚ್ಚೇ ಇತ್ತು.  

ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್‌ ವೇಳೆ ಮಳೆ ಅಡ್ಡಿಯಾಗಿತ್ತು. ಈ ವೇಳೆ ಫಾಫ್‌ ಡು ಪ್ಲೆಸಿಸ್‌ ಮತ್ತು ಕೊಹ್ಲಿ ಅಂಪೈರ್‌ಗಳ ಜೊತೆಗೆ ತೀವ್ರ ವಾಗ್ವಾದ ನಡೆಸಿದರು. ಇದಕ್ಕೆ ಕಾರಣವೂ ಇದೆ. ಮಳೆಯ ಕಾರಣ ಮೈದಾನದಲ್ಲಿ ಇಬ್ಬನಿಯಿಂದ ಚೆಂಡು ತುಂಬಾ ಒದ್ದೆಯಾಗಿತ್ತು. ಈ ವೇಳೆ ಆರ್‌ಸಿಬಿ ಬೌಲರ್‌ಗಳು ಚೆನ್ನಾಗಿ ಬೌಲಿಂಗ್‌ ಮಾಡಲು ಸಾಧ್ಯವಾಗುತ್ತಿರಲಿಲ್ಲ. 

ಇದನ್ನೂ ಓದಿ: RCB ಮ್ಯಾಚ್‌ ಗೆಲ್ಲುತ್ತಿದ್ದಂತೆ ಭಾವುಕರಾದ ಅನುಷ್ಕಾ... ವಿರಾಟ್‌ ಕೊಹ್ಲಿ ರಿಯಾಕ್ಷನ್‌ ವೈರಲ್!

ಬೌಲರ್‌ಗಳ ಕೈಯಿಂದ ಚೆಂಡು ಜಾರುತ್ತಿತ್ತು. ಹೀಗಾಗಿ ಬ್ಯಾಟ್ಸಮನ್‌ಗಳ ವಿರುದ್ಧ ಚೆನ್ನಾಗಿ ಬೌಲಿಂಗ್‌ ಮಾಡಲು ಸಾಧ್ಯವಾಗುತ್ತಿರುತ್ತಿರಲಿಲ್ಲ. ಹೀಗಾಗಿ ಕೊಹ್ಲಿ- ಡುಪ್ಲೆಸಿಸ್‌ ಇಬ್ಬರೂ ಚೆಂಡನ್ನು ಬದಲಾಯಿಸುವಂತೆ ಅಂಪೈರ್‌ಗೆ ಪದೇ ಪದೇ ಮನವಿ ಮಾಡಿಕೊಂಡರು. ಆದರೆ ಇದಕ್ಕೆ ಅವರು ಒಪ್ಪಿರಲಿಲ್ಲ. ಹೀಗಾಗಿ ಸಿಟ್ಟಿಗೆದ್ದ ಕೊಹ್ಲಿ ಅದೇ ಚೆಂಡಿನಲ್ಲಿ ಬೌಲಿಂಗ್‌ ನಡೆಸುವುದು ಹೇಗೆ ಅಂತಾ ಕೋಪಿಸಿಕೊಂಡಿದ್ದರು.  

12ನೇ ಓವರ್​ನ 2ನೇ ಎಸೆತದಲ್ಲಿ ಲಾಕಿ ಫರ್ಗುಸನ್ ಕೈಯಿಂದ ಚೆಂಡು ಜಾರಿತ್ತು. ಆ ಎಸೆತವನ್ನು ಸಿಎಸ್‌ಕೆ ಬ್ಯಾಟರ್​ ರಚಿನ್ ರವೀಂದ್ರಗೆ ಸುಲಭವಾಗಿ ಹೊಡೆದು ಸಿಕ್ಸರ್‌ ಬಾರಿಸಿದರು. ಇದರಿಂದ ಮತ್ತೆ ಕೊಹ್ಲಿ ಮತ್ತು ಡು ಪ್ಲೆಸಿಸ್​ಗೆ ಕೋಪ ನೆತ್ತಿಗೇರಿತ್ತು. ಕೂಡಲೇ ಇಬ್ಬರೂ ಅಂಪೈರ್‌ ಜೊತೆಗೆ ಮಾತುಕತೆ ನಡೆಸಿದರು. ಕೈಯಿಂದ ಜಾರುತ್ತಿದ್ದ ಚೆಂಡನ್ನು ಬದಲಾಯಿಸುವಂತೆ ಮತ್ತೊಮ್ಮೆ ಮನವಿ ಮಾಡಿಕೊಂಡರು. ಆದರೆ ಅವರ ಮಾತಿಗೆ ಅಂಪೈರ್‌ ಸಮ್ಮತಿ ನೀಡಲಿಲ್ಲ. ಇದು ಕೊಹ್ಲಿಯ ಕಣ್ಣು ಕೆಂಪಗಾಗುವಂತೆ ಮಾಡಿತ್ತು. ಅಂಪೈರ್‌ ನಿರ್ಧಾರದಿಂದ ಕೊಹ್ಲಿ ಮತ್ತು ಡು ಪ್ಲೆಸಿಸ್‌ ಮೈದಾನದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದ್ದು ಕಂಡುಬಂತು.

ಇದನ್ನೂ ಓದಿ: RCB Top-5 Players: ಈ ಆಟಗಾರರಿಂದಲೇ ರಾಯಲ್‌ ಚಾಲೆಂಜರ್ಸ್‌ ಪ್ಲೇಆಫ್‌ ತಲುಪಿದ್ದು!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
    

Trending News