“ಹೆಲ್ಮೆಟ್ ಎಸೆದು ಕೋಪ ಹೊರಹಾಕಿದ್ರು”- ಧೋನಿಯ 2ನೇ ಮುಖ ಕಂಡು ಬೆದರಿದ ಸುರೇಶ್ ರೈನಾ ಹೇಳಿದ್ದೇನು?

MS Dhoni Angry: ಐಪಿಎಲ್ 2014 ರಲ್ಲಿ ಪಂಜಾಬ್ ಕ್ವಾಲಿಫೈಯರ್-2 ರಲ್ಲಿ CSK ಅನ್ನು ಎದುರಿಸಿತ್ತು. ನಾಯಕ ಧೋನಿ ಟಾಸ್ ಗೆದ್ದು ಪಂಜಾಬ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಸೆಹ್ವಾಗ್ ಅವರ ಶತಕ ಮತ್ತು ಮಿಲ್ಲರ್ ಅವರ ಬಿರುಸಿನ ಇನ್ನಿಂಗ್ಸ್‌ನಿಂದಾಗಿ ಪಂಜಾಬ್ ಸ್ಕೋರ್‌ ಬೋರ್ಡ್‌’ನಲ್ಲಿ 226 ರನ್‌’ಗಳ ಬೃಹತ್ ಸ್ಕೋರ್ ಗಳಿಸಿತು.

Written by - Bhavishya Shetty | Last Updated : Apr 23, 2024, 09:21 PM IST
    • ಡ್ರೆಸ್ಸಿಂಗ್ ರೂಮ್‌’ನಲ್ಲಿ ಮಹಿ ಕೋಪಗೊಂಡ ಘಟನೆಯನ್ನು ವಿವರಿಸಿದ ರೈನಾ
    • ಐಪಿಎಲ್ 2014 ರಲ್ಲಿ ಪಂಜಾಬ್ ಕ್ವಾಲಿಫೈಯರ್-2 ರಲ್ಲಿ CSK ಅನ್ನು ಎದುರಿಸಿತ್ತು
    • ಧೋನಿ ಕೋಪವನ್ನು ತಂಡದ ಕೆಲ ಆಟಗಾರರು ಕಂಡಿದ್ದಾರೆ. ಅದರಲ್ಲಿ ಒಬ್ಬರು ಸುರೇಶ್ ರೈನಾ
“ಹೆಲ್ಮೆಟ್ ಎಸೆದು ಕೋಪ ಹೊರಹಾಕಿದ್ರು”- ಧೋನಿಯ 2ನೇ ಮುಖ ಕಂಡು ಬೆದರಿದ ಸುರೇಶ್ ರೈನಾ ಹೇಳಿದ್ದೇನು? title=
Suresh Raina Statement on Dhoni

Suresh Raina Statement on Dhoni: ಎಂಎಸ್ ಧೋನಿ ಅತ್ಯಂತ ಶಾಂತ ಸ್ವಭಾವಕ್ಕೆ ಹೆಸರುವಾಸಿಯಾದ ಆಟಗಾರ. ಪರಿಸ್ಥಿತಿ ಏನೇ ಇರಲಿ, ಮಹಿ ಯಾವಾಗಲೂ ಪಂದ್ಯದಲ್ಲಿ ತಾಳ್ಮೆಯಿಂದ ಇರುತ್ತಾರೆ. ಆದರೆ ಧೋನಿ ಅಭಿಮಾನಿಗಳಿಗೆ ಕ್ಯಾಪ್ಟನ್ ಕೂಲ್ ಆಗಿದ್ದರೂ, ಅವರ ಕೋಪವನ್ನು ತಂಡದ ಕೆಲ ಆಟಗಾರರು ಕಂಡಿದ್ದಾರೆ. ಅದರಲ್ಲಿ ಒಬ್ಬರು ಸುರೇಶ್ ರೈನಾ. ಐಪಿಎಲ್ 2014 ರಲ್ಲಿ ಡ್ರೆಸ್ಸಿಂಗ್ ರೂಮ್‌’ನಲ್ಲಿ ಮಹಿ ಕೋಪಗೊಂಡ ಘಟನೆಯನ್ನು ಸ್ವತಃ ಅವರೇ ವಿವರಿಸಿದ್ದಾರೆ.

ಇದನ್ನೂ ಓದಿ: Neha Murder Case : ನೇಹಾ ಹಿರೇಮಠ್ ಹತ್ಯೆ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗುವುದು : ಸಿಎಂ ಸಿದ್ದರಾಮಯ್ಯ 

ಐಪಿಎಲ್ 2014 ರಲ್ಲಿ ಪಂಜಾಬ್ ಕ್ವಾಲಿಫೈಯರ್-2 ರಲ್ಲಿ CSK ಅನ್ನು ಎದುರಿಸಿತ್ತು. ನಾಯಕ ಧೋನಿ ಟಾಸ್ ಗೆದ್ದು ಪಂಜಾಬ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಸೆಹ್ವಾಗ್ ಅವರ ಶತಕ ಮತ್ತು ಮಿಲ್ಲರ್ ಅವರ ಬಿರುಸಿನ ಇನ್ನಿಂಗ್ಸ್‌ನಿಂದಾಗಿ ಪಂಜಾಬ್ ಸ್ಕೋರ್‌ ಬೋರ್ಡ್‌’ನಲ್ಲಿ 226 ರನ್‌’ಗಳ ಬೃಹತ್ ಸ್ಕೋರ್ ಗಳಿಸಿತು. ಇದಕ್ಕೆ ಪ್ರತೀಕಾರವಾಗಿ ಸುರೇಶ್ ರೈನಾ ಕೇವಲ 25 ಎಸೆತಗಳಲ್ಲಿ 87 ರನ್‌ಗಳ ಇನಿಂಗ್ಸ್‌ ಆಡುವ ಮೂಲಕ ಪಂದ್ಯವನ್ನಾಡಿದರು. ಆದರೆ ನಿರ್ಣಾಯಕ ಹಂತದಲ್ಲಿ ರನ್ ಔಟ್ ಆದರು. ಸ್ಫೋಟಕ ಬ್ಯಾಟ್ಸ್ ಮನ್ ಮೆಕಲಮ್ ಕೂಡ ರನ್ ಔಟ್’ಗೆ ಬಲಿಯಾದರು. ಧೋನಿ 42 ರನ್‌’ಗಳ ಇನಿಂಗ್ಸ್ ಆಡಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಸೋಲಿನ ನಂತರ ಧೋನಿ ತುಂಬಾ ಕೋಪಗೊಂಡಿದ್ದರು.

ಇದನ್ನೂ ಓದಿ: ತೂಕ ಇಳಿಕೆಗೆ ಸೂಪರ್ ಫುಡ್ ಈ ನೀರು: ಮುಂಜಾನೆ ಬ್ರಷ್ ಮಾಡುವ ಮುನ್ನ ಕುಡಿದರೆ ಸಾಕು!

ರೈನಾ ಹೇಳಿದ್ದೇನು?

ಧೋನಿ ಬಗ್ಗೆ ಲಾಲಂಟಾಪ್‌ನಲ್ಲಿ ಬಹಿರಂಗಪಡಿಸಿದ ರೈನಾ, “ಧೋನಿ ಇಷ್ಟು ಕೋಪಗೊಂಡದ್ದನ್ನು ನಾನು ನೋಡಿರಲಿಲ್ಲ. ಆ ಪಂದ್ಯದ ನಂತರ ಅವರು ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದರು. ಪ್ಯಾಡ್ ಮತ್ತು ಹೆಲ್ಮೆಟ್ ಅನ್ನು ಡ್ರೆಸ್ಸಿಂಗ್ ಕೋಣೆಯಲ್ಲಿ ಎಸೆದಿದ್ದರು. ಗೆಲ್ಲಬೇಕಿದ್ದ ಪಂದ್ಯದಲ್ಲಿ ಸೋತಿದ್ದೇವೆ ಎಂದು ಸಿಟ್ಟಿಗೆದ್ದರು. ಇಲ್ಲದಿದ್ದರೆ ಆ ವರ್ಷವೂ ಐಪಿಎಲ್ ಗೆಲ್ಲುತ್ತಿದ್ದೆವು” ಎಂದು ಹೇಳಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News